ಮಕ್ಕಳಿಗಾಗಿ, ಮಕ್ಕಳ ಹಕ್ಕುಗಳ ಜಾರಿಗಾಗಿ ಅವಿರತ ಶ್ರಮಿಸುತ್ತಿರುವ ಅಕ್ಷರ ಮಾಂತ್ರಿಕ ಹಾಗು ಸಂವೇದನಾಕಾರ – ನಾಗೇಂದ್ರ ಪ್ರಸಾದ್

ಮಕ್ಕಳಿಗಾಗಿ ಮಕ್ಕಳ ಹಕ್ಕುಗಳ ಜಾರಿಗಾಗಿ ಅವಿರತ ಶ್ರಮಿಸುತ್ತಿರುವ ಅಕ್ಷರ ಮಾಂತ್ರಿಕ ಹಾಗು ಸಂವೇದನಾಕಾರರಾದ ನಮ್ಮ ವಾಸು ಸಾರ್ ರಿಗೆ ಇಷ್ಟು ಬೇಗ ಅರವತ್ತಾಗಿ ಬಿಡ್ತಾ ನಂಬಲಿಕ್ಕೆ ಕಷ್ಟಸಾಧ್ಯ! ಕಾರಣ, ಅವರು ಇನ್ನೂ ಕೆಲಸ ಮಾಡಬೇಕು…
ವಿಚಾರವಾದದಲ್ಲಿ, ಚಾರ್ವಾಕ ಸೈದ್ಧಾಂತಿಕ ಹಿನ್ನೆಲೆಯಿಂದ ಯಾರು ಹೇಗೇ ನೋಡಿದರೂ, ನನಗೆ ಅವರ ಬಗ್ಗೆ ಗುರು, ದೈವಭಾವ….
ಅವರ ವೃತ್ತಿ ಜೀವನದಲ್ಲಿನ ಸರಿಸುಮಾರು ಹತ್ತು ವರ್ಷ ಅವರೊಟ್ಟಿಗೆ ಕಲಿತದ್ದು , ಅರಿತದ್ದು, ಈ ಕೆಲಸ ಹೀಗೇ ಆಗಬೇಕು ಎಂಬ ಕರಾರುವಕ್ಕಾದ ನಿಲುವುಗಳಿಂದ ಹಾಗು ಭಾಷೆಯಲ್ಲಿನ ಪದಗಳ ಜೋಡಣೆ….
ಹೀಗೆ ಹತ್ತು ಹಲವು…..
ಸಿಆರ್ಟಿ – ಅದೊಂದು ಡೀಮ್ಡ್ ವಿಶ್ವವಿದ್ಯಾನಿಯದ ರೀತಿ ಸಂಬಳ ಕೊಟ್ಟು ಕಲಿಸಿದರು…
“ಮಹಾ ಗುರು ಸುಮ್ಮನೆ ಅರವತ್ತರ ವಸಂತ ಕಳೆದದ್ದಲ್ಲಾ. ಅದು ಸಾರ್ವಕಾಲಿಕವಾಗಿ ನೆನಪಿಡಬೇಕಾದ ಸಾರ್ಥಕ ದಿನಗಳು.
ವಾಸು ಸಾರ್ ನಿಮಗೆ ಶುಭಾಶಯಗಳು.”
ನಾಗೇಂದ್ರ ಪ್ರಸಾದ್






