vasu-blog-image-children

“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ವಗಳು.”

-ಡಾ. ಎನ್.ವಿ. ವಾಸುದೇವ ಶರ್ಮಾ
ಟ್ರಸ್ಟಿ ಮತ್ತು ಕಾರ್ಯಕಾರಿ ನಿರ್ದೇಶಕರು, ಚೈಲ್ಡ್ ರೈಟ್ಸ್ ಟ್ರಸ್ಟ್

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ  ಹಂಚಿಕೊಂಡಿದ್ದಾರೆ.

ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.

ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

– ಎನ್. ಲಕ್ಷ್ಮಿ

lakshami
vasu-blog-image-2-hp

ವಾಸು ಕುರಿತ ಬರಹಗಳು

  • vasu-blog-1-main

ವಾಸು ಎಂಬ ಅರಳಿಮರ – ಡಾ ಜಿ. ರಾಮಕೃಷ್ಣ

ಭಗವದ್ಗೀತೆಯಲ್ಲಿ ಮಹತ್ತಾದ ಸತ್ತ್ವವನ್ನು ʻಊರ್ಧ್ವಮೂಲʼ ಮತ್ತು ʻಅಧಃಶಾಖʼ ಎಂದು ಹೆಸರಿಸಲಾಗಿದೆ: ಬೇರು ಮೇಲೆ ಮತ್ತು ಕೊಂಬೆಗಳು ಕೆಳಗೆ. ನಮ್ಮ ವಾಸು ಅಂಥವನು.  ಒಂದು ಲೇಖನದಲ್ಲಿ ಯಾರನ್ನಾದರೂ [...]

  • vasu-blog-2-1

ಗೆಳೆಯ ವಾಸು – ಶಶಿಧರ ಭಾರಿಘಾಟ್

ಗೆಳೆಯ ವಾಸು – ವಾಸುದೇವ ಶರ್ಮಾ ಅವರ ಬಗ್ಗೆ ಬರೆಯುವುದೆಂದರೆ ನಾಲ್ಕು ದಶಕಗಳಷ್ಟು ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿ ಬರೆಯಬೇಕು. ಹಸನ್ಮುಖಿ ಹಾಗೂ ಗಂಭೀರವದನವನ್ನು  ಹೊತ್ತು, [...]

  • vasu-blogs-2-2

ವಾಸು ಅಂದರೆ ಏನು? – ಡಾ. ಕಮಲಾಕರ ಕಡವೆ

ವಾಸುದೇವ ಶರ್ಮಾ ಅವರೊಂದಿಗೆ ನನ್ನ ಒಡನಾಟ ಇದ್ದದ್ದು ಕೇವಲ ಒಂದು ವರುಷ ಮಾತ್ರ: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ, 1985-86 ರ ಅವಧಿಯಲ್ಲಿ. ಪತ್ರಿಕೋದ್ಯಮದಲ್ಲಿ ಪದವಿ ಕಲಿಯಲು [...]

  • vasu-blogs-2-3

ಮಗು ಮನಸ್ಸಿನ ಜಂಗಮ ಸಂಘಟಕ ವಾಸು – ಪ್ರಕಾಶ್‌ ರಾವಂದೂರು

ತುಂಬ ತುಂಟ, ಗಲಾಟೆ ಮಾಡುವ ಮಗುವನ್ನು ಬಹುಮಾನದ ಆಸೆ ತೋರಿಸಿ ಚಕ್ಕಂಬಕ್ಕಳ ಹಾಕಿ ಕೂತು, ಮಾತಾಡದಂತೆ ಬಾಯಿಗೆ ಬೀಗ ಹಾಕಿಕೊಂಡು ಒಂದೈದು ನಿಮಿಷ ಸುಮ್ಮನೆ ಕೂರುವಂತೆ [...]

  • ananda-raje-urus

ವಾಸು ಎಂಬ ಬೆಳಕಿಗೆ 60 – ಎಂ.ಕೆ. ಆನಂದ ರಾಜೇ ಅರಸ್

ಮೈಸೂರಿನಲ್ಲಿರುವ ಚಾಮುಂಡಿಪುರಂನ ಪ್ರಧಾನ ವೃತ್ತ ಮೈಸೂರಿನ ಪ್ರಮುಖ ತಾಣಗಳಲ್ಲಿ ಒಂದು. ೮೦ರ ದಶಕದಲ್ಲಿ ಈ ವೃತ್ತ ಚಟುವಟಿಕೆಗಳ ಆಗರವಾಗಿತ್ತ್ತು. ಈ ವೃತ್ತದಲ್ಲಿ ರಾಷ್ಟ್ರಮಟ್ಟದ ನಾಯಕರು ಬಂದು [...]

  • chandrashekhara-belagere

ನನಗೊಂದು ಎಚ್ಚರಿಕೆಯ ನೆರಳಾಗಿರುವ ವಾಸುದೇವ ಶರ್ಮಾ – ಚಂದ್ರಶೇಖರ ಬೆಳಗೆರೆ

ಮೈಸೂರಿಗೆ ಬಂದು ತಿಂಗಳಾಗಿತ್ತು. ಮಹಾರಾಜಾ ಕಾಲೇಜಿಗೆ ಸೇರಿ ವಾರವೂ ಕಳೆದಿರಲಿಲ್ಲ. ಆಗೊಂದು ದಿನ ಕಾಲೇಜಿನ ಪ್ರಾಂಗಣದಲ್ಲಿ “ಧ್ವನಿ” ಎಂಬ ಗೋಡೆ ಪತ್ರಿಕೆಯಲ್ಲಿ ಚಂದವಾಗಿ ಕಾಣುವ ಅಕ್ಷರಗಳನ್ನು [...]

ಮಕ್ಕಳ ಪರವಾದ ದನಿ ವಾಸು – ಪರಶುರಾಮ್

ಮಕ್ಕಳು ಈ ದೇಶದ ಸಂಪತ್ತು. ಅವರಿಗೆ ಬಾಲ್ಯದಲ್ಲಿ ಆಗುವ ಗಾಯ ಮಾಯುವುದೇ ಇಲ್ಲ. ಆ ನೋವು ನಿರಂತರ. ಹಾಗಾಗಿ ಮಕ್ಕಳಿಗೆ ಹಕ್ಕುಗಳು ಬೇಕು. ಬೆಳೆಯುವ, ನಲಿಯುವ [...]

ನಾಟಕದಿಂದ ನನ್ನನ್ನು ಮಕ್ಕಳ ಕ್ಷೇತ್ರಕ್ಕೆ ಎಳೆತಂದವರು ವಾಸು – ಅಶ್ವತ್ಥನಾರಾಯಣ

ಮಹಾರಾಜ ಕಾಲೇಜಿಗೆ ಸೇರಿದ ಪ್ರಾರಂಭದಲ್ಲಿ ನನಗೆ ಅಕ್ಷರಶಃ ಆತಂಕ ಶುರುವಾಗಿತ್ತು. ಆ ದೊಡ್ಡ ಕಟ್ಟಡದ ತುಂಬಾ ಸಾವಿರಾರು ವಿದ್ಯಾರ್ಥಿಗಳು. ಯಾರಿಗೆ ಯಾರು ಗೊತ್ತೋ ಗೊತ್ತಿಲ್ಲವೋ? ನನಗೆಲ್ಲರೂ [...]

  • vasu-blog-2-8

ಶರ್ಮನೆಂದರೆ ಮಕ್ಕಳ ಹಕ್ಕುಗಳ ವಿಶ್ವಕೋಶ ಮತ್ತು – ಶಿವರಾಂ ಪೈಲೂರು

ಮೈಸೂರಿನ ಮಹಾರಾಜ ಕಾಲೇಜು ದಿನಗಳಲ್ಲಿ ಶರ್ಮನೆಂದರೆ ಜುಬ್ಬಾ ಅಥವಾ ತುಂಬು ತೋಳಿನ ಅಂಗಿ, ಸಾದಾ ಪ್ಯಾಂಟು, ಕ್ರಾಸ್ ಆಗಿ ಇಳಿಬಿಡುತ್ತಿದ್ದ ಬಟ್ಟೆ ಚೀಲ, ಮೂಗಿನ ಮೇಲೆ [...]

  • vasu-blogs-2-9

ವಾಸುದೇವ ಶರ್ಮಾ: ನಾಲ್ಕು ದಶಕಗಳ ನಂಟು – ನಿರಂಜನ ವಾನಳ್ಳಿ

ವಾಸುದೇವ ಶರ್ಮನಿಗೆ ಅರವತ್ತು ಆಯಿತು ಎಂದು ಅವನ ಮಡದಿ ಲಕ್ಷ್ಮಿ ನೆನಪು ಮಾಡಿದಾಗ ವಾಸುವಿನ ಜೊತೆಗೆ ನನಗೂ ಅರವತ್ತಾದುದು ನೆನಪಾಯ್ತು! ಈ ಜೊತೆಯ ಪಯಣಕ್ಕೇ ಅರವತ್ತು [...]

  • vasu-blogs-2-10

60ರ ಹರೆಯದ ವಾಸುದೇವ ಶರ್ಮನಿಗೆ ಗೆಳೆಯ ಸಚ್ಚಿತ್‌ನ ಶುಭಾಶಯ – ಸಚಿತ್‌ ಶರ್ಮಾ

ಆಗಷ್ಟೆ ಪದವಿ ಪೂರ್ವ ಶಿಕ್ಷಣ ಮುಗಿಸಿ ಪದವಿ ಕಾಲೇಜು ರಂಗಕ್ಕೆ ಕಾಲಿಟ್ಟ ಆ ದಿನಗಳಲ್ಲಿ ಸ್ನೇಹ ಸಂಪಾದಿಸಿಕೊಳ್ಳುವ ಕಾತುರ ಆತುರ ಗ್ರಾಮಾಂತರದ ಪಡ್ಡೆ ಹುಡುಗರಿಗೆ ಅನಿವಾರ್ಯ. [...]

ನಿಮ್ಮ ನೆನಪೇ ಖುಷಿ – ಲೋಕೇಶ್‌ ಮೊಸಳೆ

ಮಕ್ಕಳ ಹಕ್ಕುಗಳು ಅದರ ಸುತ್ತಮುತ್ತ ಇಷ್ಟು ವರ್ಷ ಚಿಂತಿಸಿದ, ಮಕ್ಕಳ ಬದುಕಿಗೆ ನೆರಳಾದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.  ತಮ್ಮ ಹುಟ್ಟಿನಿಂದ ಸಮಾಜಕ್ಕೆ ಒಳ್ಳೆಯದಾಗಿದೆ. ತಮ್ಮ ಬದುಕು [...]

ನನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದ ವಾಸು – ಡಾ ಕೂಡ್ಲಿ ಗುರುರಾಜ

ವಾಸುದೇವ ಶರ್ಮಾನ ಬಗ್ಗೆ ಬರೆಯಲು ಕುಳಿತರೆ ನೆನಪುಗಳ ಮೆರವಣಿಗೆ ಸಾಗುತ್ತವೆ. ಅದು ನಮ್ಮ ಹೈಸ್ಕೂಲ್‌ ವಿದ್ಯಾಭ್ಯಾಸದ ದಿನಗಳು.  ನಾವು ಜೊತೆಯಾಗಿ ಅಭಿನಯಿಸಿದ ಸಾಲುಸಾಲು ನಾಟಕಗಳು. ನನ್ನನ್ನು [...]

ನೇರ, ನಿಷ್ಠೂರ ನುಡಿಗಳಿಂದಲೇ ಪ್ರಿಯವಾಗುವ ವಾದೇಶ – ಡಾ ಗಂಗಾಧರ ರೆಡ್ಡಿ ಎನ್.

ಆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದ ಸಮಯದಲ್ಲಿ ಗೆಳೆಯ ವೀರೇಶನಿಂದ ಸಂಪರ್ಕಕ್ಕೆ ಬಂದ ವಾಸುದೇವ ಶರ್ಮಾರವರು ಮೊದಲ ದೂರವಾಣಿ ಸಂಪರ್ಕದಿಂದಲೇ ಆಪ್ತರೆನಿಸಿದರು. ಕರೆಯನ್ನು ಸ್ವೀಕರಿಸುತ್ತಿದ್ದಂತೆಯೇ [...]